Sunday, September 8, 2013

ಅಣು ಶಕ್ತಿ ದೇಗುಲ

ಅಣು ಶಕ್ತಿ ದೇಗುಲ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಅಣು ಕೇಂದ್ರದಲ್ಲಿ ವಾಸಿಸುವ ಪ್ರೋಟಾನು ಮತ್ತು ನ್ಯೂಟ್ರಾನುಗಳು ಸಂಖ್ಯೆಯಲ್ಲಿ ಎಷ್ಟು ಇವೆ ಎನ್ನುವುದರ ಕಾರಣದಿಂದ ಆಣು ಯಾವ ಮೂಲ ವಸ್ತು ಎಂದು ನಿರ್ಧರಿತವಾಗುತ್ತದೆ. ಒಂದೇ ಒಂದು ಪ್ರೋಟಾನು ಮಾತ್ರ ಇದ್ದುಒಂದು ಕೂಡ ನ್ಯೂಟ್ರಾನು ಇಲ್ಲದ್ದಿದ್ದರೆ ಅದು ಜಲಜನಕವಾಗುತ್ತದೆ. ಎರಡು ಪ್ರೋಟಾನುಗಳು ಇದ್ದರೆ ಆ ಅನುವು ಹೀಲಿಯಮ್ ಆಗುತ್ತದೆ. ಹೀಗೆಪೂರ್ಣವಾಗಿ ಎಲ್ಲಾ ಮೂಲ ಅಣುಗಳನ್ನು ತಿಳಿಯ ಬೇಕಾದರೆ ನೀವು ಮೂಲ ಅಣುಗಳ ಪಟ್ಟಿಯನ್ನು ಗಮನದಲ್ಲಿ ಮತ್ತು ವಿಸ್ತಾರವಾಗಿ ಅಧ್ಯಯನ ಮಾಡಬೇಕು. 

ಚಿನ್ನಬೆಳ್ಳಿಇಂಗಾಲತಾಮ್ರಅಲ್ಯೂಮಿನಿಯಮ್ಕಬ್ಬಿಣಸಾರಜನಕಆಮ್ಲಜನಕ ಮುಂತಾದ ಮೂಲ ಅನುಗಲನ್ನುಅವುಗಳಿಂದ ಆಗುವ ಮೂಲ ವಸ್ತುಗಳನ್ನೂ ಅರ್ಥ ಮಾಡಿಕೊಳ್ಳಬಹುದು.

ಹೆಚ್ಚು ಹೆಚ್ಚು ಪ್ರೋಟಾನುಗಳೂನ್ಯೂಟ್ರಾನುಗಳೂ ಅಣುವಿನ ಕೇಂದ್ರದಲ್ಲಿ ಗುಂಪು ಸೇರಿದಾಗಅಣುವಿನ ಸ್ಥಿರತೆಗೆ ಕುಂದು ಬರುತ್ತದೆ. ಉದಾಹರಣೆಗೆಯುರೇನಿಯಮ್ ಮೂಲ ಅಣುಅದರಿಂದ ಆಗುವ ಮೂಲ ವಸ್ತುವು ಅಸ್ಥಿರತೆಯಿಂದ ಕೂಡಿರುವ ಗುಣವನ್ನು ಉಪಯೋಗಿಸಿಕೊಂಡುನ್ಯೂಕ್ಲಿಯರ್ ರಿಯಾಕ್ತರನ್ನು ಕಟ್ಟುತ್ತಾರೆ. ಕನ್ನಡದಲ್ಲಿ ಅಣು ಕೇಂದ್ರ ಪ್ರಕ್ರಿಯಾ ಕಾರಿ ಎಂದು ಹೆಸರಿಡಬಹುದು. ಪ್ರಕ್ರಿಯೆಯೆಂದರೆ ಮತ್ತೆ - ಮತ್ತೆ ಆಗುವ ಕ್ರಿಯೆ ಎಂದು ಅರ್ಥ. ಅಣು ಕೇಂದ್ರ ಕ್ರಿಯೆಗಳು ತಮ್ಮ ಕ್ರಿಯಾ ಚಟುವಟಿಕೆಗಳಲ್ಲಿ ಶಕ್ತಿಯನ್ನು ವಿಸರ್ಜಿಸುತ್ತವೆ. ಈ ವಿಸರ್ಜಿತ ಶಕ್ತಿಯು ಅಕ್ಕ ಪಕ್ಕದ ಅಣುವಿನ ಮೇಲೆ ಬಿದ್ದುಆ ನೆರೆಹೊರೆಯ ಅಣುಗಳಲ್ಲೂ ಅಣು ಕೇಂದ್ರ ಕ್ರಿಯೆಯನ್ನು ಆಗುವ ಹಾಗೆ ಮಾಡುತ್ತವೆ. ನೀವು ಪೋಣಿಸಿದ ಆನೆ ಅಥವಾ ಕುದುರೆ ಪಟಾಕಿಯ ಸರಪಣಿಗಳನ್ನು ನೋಡಿರಬಹುದುಹಾಗೂ ದೀಪಾವಳಿಯ ಸಮಯದಲ್ಲಿ ಇಂತಹ ಪಟಾಕಿಗಳನ್ನು ಹೊಡೆದಿರಬಹುದು. ನೀವು ಆ ಸರಪಣಿಯ ಯಾವುದೇ ಒಂದು ಪಟಾಕಿಯನ್ನು ಮಾತ್ರ ಹತ್ತಿಸಿದರೆ ಸಾಕುಒಂದರಿಂದ ಇನ್ನೊಂದೋಎರಡೋಹೆಚ್ಚೋ ಹತ್ತಿಕೊಂಡುಎಲ್ಲವೂನೆಮ್ಮ ಕಣ್ಣ ಮುಂದೆಯೇ ಪಠ-ಪಠಾರೆಂದು ಹೊಡೆದು ಹೋಗುತ್ತದೆ. ಹಾಗೆಯೇಅಣು ಕೇಂದ್ರದಲ್ಲಿ ಸರಪಣಿ ಕ್ರಿಯೆಗಳು ಆಗುತ್ತವೆ.

ಈ ಪ್ರಕ್ರಿಯಾ ಕಾರಿಯ ಗರ್ಭವನ್ನು ಯುರೇನಿಯಮ್ ಇತ್ಯಾದಿ ಅತಿ ಭಾರ ಅಣುಗಳಿಂದ ಮಾಡಿರುತ್ತಾರೆ. ಅತಿಭಾರ ಅಣು ವಸ್ತುಗಳಿಂದ ಮಾಡಿರುವುದಲ್ಲದೆಅಣು ಕೆಂದ್ರ ಕ್ರಿಯೆಯನ್ನು ಪ್ರಾರಂಭಿಸಿದ ಮೇಲೆಸರಪಣಿ ಪ್ರಕ್ರಿಯೆಗಳು ಆಗಿ ಅಗಾಧವಾದ ಶಕ್ತಿಯನ್ನು ಉತ್ಪತ್ತಿ ಮಾಡುತ್ತದೆ. ಈ ಶಕ್ತಿಯು ವಿವಿಧ ರೂಪಗಳಲ್ಲಿ ಉತ್ಪತ್ತಿಯಾಗುತ್ತವೆ. ಈ ಶಕ್ತಿಯಲ್ಲಿ ಶಾಖವು ಪ್ರಮುಖ ಮತ್ತು ಬಹು ಉಪಯೋಗಿ.
ಅಣು ಕೇಂದ್ರ ಪ್ರಕ್ರಿಯಾಕಾರಿಯಿಂದ ನೂರು - ಸಾವಿರ ಮೆಗಾ ವಾಟುಗಳಷ್ಟು ಶಾಖವು ಉತ್ಪತ್ತಿಯಾಗುತ್ತದೆ. ಒಂದು ಮೆಗಾ ಎಂದರೆಒಂದು ಬರೆದು ಅದರ ನಂತರ ಆರು ಸೊನ್ನೆಗಳನ್ನು ಬರೆಯ ಬೇಕು. ಗಿಗಾ ಎಂದರೆ ಸಾವಿರ ಮೆಗಾ ವಾಟುಗಳು. ಒಂದು ಬರೆದು ಒಂಬತ್ತು ಸೊನ್ನೆಗಳನ್ನು ಬರೆದರೆ ಗಿಗಾ ಆಗುತ್ತದೆ.

ಶಾಖದಿಂದ ಒಂದು ಬೃಹತ್ ಹಂಡೆಯಲ್ಲಿ ನೀರನ್ನು ಕುದಿಸಿನೀರಿನ ಆವಿಯನ್ನು ಉತ್ಪಾದಿಸಿಬೃಹತ್ ವಿದ್ಯುತ್ ರಾಟೆಗಳನ್ನು ತಿರುಗಿಸುವರು. ಈ ಬೃಹತ್ ವಿದ್ಯುತ್ ರಾಟೆಗಳು ವಿದ್ಯುತ್ಕಾಂತ - ಅಯಸ್ಕಾಂತ ಗಳ ಪರಸ್ಪರ ಉತ್ಸಾಹಕರಣ ಭೌತ ತತ್ವಗಳಿಂದ ಕೂಡಿದ್ದುಆವಿ ಶಕ್ತಿಯಿಂದ ತಿರುಗಿ ವಿದ್ಯುತ್ ಶಕ್ತಿಯನ್ನು ಉತ್ಪಾದಿಸುತ್ತದೆ. ಇಂತಹ ರಾಟೆಗೆ "ಆವಿ ರಾಟೆ" ಎನ್ನೋಣ.

ಒಂದೊಂದು ಶಕ್ತಿ ಪರಿವರ್ತನಾ ಕ್ರಿಯಾ ಹೆಜ್ಜೆಯಲ್ಲೂ ಒಂದು ರೀತಿಯ ಶಕ್ತಿಯು ನೂರರಲ್ಲಿ ಶೇಕಡ ಭಾಗ ಮಾತ್ರ ಪರಿವರ್ತಿತವಾಗುತ್ತದೆ. ಮಿಕ್ಕ ಭಾಗವು ಬಹಳ ಸಾರಿ ಉಪಯೋಗಕ್ಕೆ ಬರುವುದಿಲ್ಲ. ಶಕ್ತಿ ಪರಿವರ್ತನ ಕ್ರಿಯೆ ಯಾವುದು ಎಂದು ಪ್ರಸ್ತಾಪಿಸಿದಾಗ ಮಾತ್ರ ಶೇಕಡದಲ್ಲಿ ಎಷ್ಟು ಉಪಯೊಗ ಯೋಗ್ಯ ಎಂಬುದನ್ನು ಲೆಕ್ಕ ಹಾಕ ಬಹುದು. ಒಂದು ಮೆಗಾ ವಾಟು ವಿದ್ಯುತ್ ಶಕ್ತಿಯಿಂದ ಸುಮಾರು ಸಾವಿರ ಭಾರತೀಯ ಮನೆಗಳಿಗೆ ವಿದ್ಯುತ್ತು ಒದಗಿಸಬಹುದು. 
ಅಣು ಕೇಂದ್ರ ಪ್ರಕ್ರಿಯಾಕಾರಿಯಲ್ಲಿಶಾಖವಲ್ಲದೆವಿಸ್ತಾರೀ ಕಿರಣ ಶಕ್ತಿಯೂ ಉತ್ಪತ್ತಿಯಾಗುತ್ತದೆ. ಉದಾಹರಣೆಗೆಆಲ್ಫ಼ಬೀಟಗ್ಯಾಮನ್ಯೂಟ್ರಿನೋ ಮುಂತಾದ ಕಿರಣಗಳು ಹುಟ್ಟಿದಾಕ್ಷಣ ಎಲ್ಲ ದಿಕ್ಕಿನಲ್ಲೂ ವಿಸ್ತರಿಸುತ್ತವೆ. ಈ ಕಿರಣಗಳಿಗೆ ವಿಸ್ತಾರೀ ಕಿರಣಗಳೆಂದು ಕರೆಯಬಹುದು. ಬೆಳಕೂ ಅಷ್ಟೇ! ಅದೂ ವಿಸ್ತಾರೀ ಕಿರಣ ಶಕ್ತಿ. ಈ ವಿಸ್ತಾರೀ ಕಿರಣಗಳಿಗೆ ಅಗಾಧವಾದ ಶಕ್ತಿಯಿದ್ದುಅತಿ ವೇಗದಲ್ಲಿ ಓಡುತ್ತವೆ. ತಮ್ಮ ದಾರಿಯಲ್ಲಿ ಸಿಕ್ಕಿದ ವಸ್ತುಗಳ ಮೇಲೆಪ್ರಮುಖವಾಗಿಆ ವಸ್ತುಗಳ ಅಣು ಕೇಂದ್ರದಲ್ಲಿರುವ ಪೋಟಾನಿನ ಮೇಲೆಮತ್ತೆ ಕೆಲವು ಸಾರಿ ನ್ಯೂಟ್ರಾನಿನ ಮೇಲೆಅವುಗಳಲ್ಲಿ ಇನ್ನೂ ಕೆಲವು ಎಲಕ್ಟ್ರಾನಿನ ಮೇಲೂ ಬಿದ್ದು ಪರಸ್ಪರ ಕ್ರಿಯೆಯನ್ನು ನಡೆಸುತ್ತವೆ. ಈ ವಿಸ್ತಾರೀ ಕಿರಣಗಳು ಮಾನವ ಮತ್ತು ಪ್ರಾಣಿ ಕುಲಗಳಿಗೆ ಹಾನಿ.

ಈ ಅತೀವ್ರ ಮತ್ತು ಸುಲಭವಾಗಿ ತಡೆಯಲಾಗದ ವಿಸ್ತಾರೀ ಮತ್ತು ಅತೀ ಕ್ರಿಯಾಕಾರಿ ಕಿರಣಗಳನ್ನು ತಡೆಹಾಕುವುದು ಅಣು ಕೇಂದ್ರ ಪ್ರಕ್ರಿಯಾಕಾರಿಗಳ ವಿಜ್ಙಾನಿಗಳ ಮುಖ್ಯ ಜವಾಬ್ದಾರಿಗಳಲ್ಲಿ ಒಂದು. ಅದಕ್ಕೆಸೀಸ ಇತ್ಯಾದಿ ಲೋಹಮತ್ತಿತರ ವಿಶೇಷ ವಸ್ತುಗಳನ್ನು ಉಪಯೊಗಿಸಿಹತ್ತಾರಿ ಅಡಿ ದಪ್ಪದ ಗೊಡೆಗಳನ್ನು ಕಟ್ಟಿ ಮಾನವ ಹಾನಿ ವಿಸ್ತಾರೀ ಕಿರಣಗಳನ್ನು ತಡೆ ಹಾಕುತ್ತಾರೆ.

ಅಣು ಶಕ್ತಿಯು ಮಾನವನಿಗೆ ಬಹಳ ಉಪಕಾರಿಯಾಗಿದೆಅಣು ಶಕ್ತಿಯನ್ನು ಉತ್ಪಾದಿಸುವಾಗ ನಿಯಂತ್ರಣವು ಮಾತ್ರ ಅತಿ ಮುಖ್ಯ. ಶಕ್ತಿಯು ಬಹು ರೂಪಿ: ಗಂಗೆವಾಯುಅಗ್ನಿಶಬ್ದವಿದ್ಯುತ್ಸೂರ್ಯ ಇವೆಲ್ಲಾ ಪ್ರಕೃತಿ ಮಾತೆಯ ಶಾಕ್ತ ರೂಪಗಳಂತೆಅಣು ಶಕ್ತಿಯು ಇವೆಲ್ಲಗಳಿಗೂ ಮೂಲ ರೂಪಿಮೂಲ ಕಾರಣ.

ಬೇರೆಲ್ಲಾ ಶಕ್ತಿ ರೂಪಗಳಿಗೆ ದೇಗುಲಗಳನ್ನು ಕಟ್ಟುವ ಹಾಗೆಮಾನವನು ಅಣು ಶಕ್ತಿಗೆ ಪ್ರಕ್ರಿಯಾಕಾರಿ ಮಹಾ ದೇವಾಲಯವನ್ನು ನಿರ್ಮಿಸಿಶಕ್ತಿ ಆರಾಧಕನಾಗಿದ್ದಾನೆ ಅಲ್ಲವೇಎಲ್ಲವೂ ನಿಮ್ಮ ಅಂತರ್ದೃಷ್ಟಿ ಹೇಗಿದೆಯೋ ಅಂತೆಯೇ: ಒಂದು ಕಣ್ಣಿಗೆ ಮಹಾ ಯಂತ್ರಧೀಮಂತ ತಂತ್ರ. ಒಳಗಣ್ಣಿಗೆ ಶಕ್ತಿ ಆರಾಧನಾ ಅಭಿಯಂತ್ರ!

ಕೈಮುಗಿದು ಬನ್ನಿಮನ ಬಿಚ್ಚಿ ತಿಳಿಯೋಣವೆನ್ನಿಸತ್ಯವನ್ನು ಅರಸುವಚಿತ್ತದಿಂದ ಅಧ್ಯಯಿಸುವಪ್ರಕೃತಿಯ ಗುಟ್ಟು ಕಂಡಾಗ ಆನಂದಿಸುವ ವಿಜ್ಙಾನಿಯ ನಿತ್ಯ ಅಚ್ಚರಿಯ ವ್ರತವು ಸತ್ - ಚಿತ್ - ಆನಂದವಲ್ಲದೆ ಬೇರೇನೂ ಅಲ್ಲ. ಅಚ್ಚರಿಯ ಆಚಾರದ ಕಂಕಣ ಕಟ್ಟಿದವರು ವಿಜ್ಙಾನಾಚಾರ್ಯರು. 

No comments:

Post a Comment