Sunday, September 8, 2013

ಬಿಂಬ ಭವಕ್ಕೆ ನಿಮಗೆಲ್ಲಾ ಸ್ವಾಗತ

ಬಿಂಬ ಭವಕ್ಕೆ ನಿಮಗೆಲ್ಲಾ ಸ್ವಾಗತ
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ

ಮಹಾ ಸ್ಫೋಟ ಎನ್ನಿಬೃಹತ್ ವಿಕಾಸವೆನ್ನಿಬಿಗ್ ಬ್ಯಾಂಗ್ ಎಂದು ಇಂಗ್ಲೀಷಿನಲ್ಲಿ ಅನ್ನಿ. ಈ ವಿಜ್ಙಾನ  ಶಾಸ್ತ್ರದ ಪ್ರಕಾರ. ನಾವಿರುವ ವಿಶ್ವವು ಒಂದು ಬೃಹತ್ ಸ್ಫೋಟದಿಂದ ಉದ್ಭವವಾಯಿತು. ಈ ಶಾಸ್ತ್ರದ ಪ್ರಕಾರಭವದ ಜೊತೆಗೆಅದರ ವಿರುಧ್ಧ ಅಥವಾ ಪ್ರತಿಬಿಂಬ ಗುಣಗಳನ್ನು ಹೊಂದಿರುವ ಬಿಂಬ ಭವವೂ ಉದ್ಭವವಾಯಿತು. ಭವ ಮತ್ತು ಅದರ ಬಿಂಬಗಳ ಪ್ರಮಾಣಗಳುತದ್ವಿರುಧ್ಧವಾದರೂಸಮ ಪ್ರಮಾಣಗಳಲ್ಲಿ ಸೃಷ್ಟಿಯಾದವು. ಈ ಎರಡೂ ಒಂದನ್ನೊಂದು ಢಿಕ್ಕಿ ಹೊಡೆದಾಗ ಎರಡೂ ವಿನಾಷವಾಗಿ ಅದೃಶ್ಯವಾಗಬೆಕಾಗಿತ್ತು. ಹಾಗೇನಾದರೂ ಸಮ ಪ್ರಮಾಣದಲ್ಲಿ ಹುಟ್ಟಿ, ವಿನಾಷವಾಗಿದ್ದರೆನಾವೂನೀವೂ,ನಮ್ಮ ಸರ್ವಲೋಕವೂ ಇರುವುದು ಸಾಧ್ಯವಾಗುತ್ತಿರುವುದಿಲ್ಲ ಅಲ್ಲವೇಇದರ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇವೆ.

ನಾವಿರುವ ಭವದಲ್ಲಿ ನಮ್ಮ ಅಣು ಲೋಕದಲ್ಲಿ ಇರುವ ವಿವಿಧ ಕಣಗಳಿಗೆ ಮೂಲ ಕಣ (ಇಂಗ್ಲೀಷಿನಲ್ಲಿ ಫ಼ಂಡಮೆಂಟಲ್ ಪಾರ್ಟಿಕಲ್) ಎನ್ನುತ್ತಾರೆ. ಉದಾಹರಣೆಗೆಎಲಕ್ಟ್ರಾನು  ಒಂದು. ಅಣು ಕೇಂದ್ರದಲ್ಲಿ ಇರುವ ಪ್ರೋಟಾನು ಮತ್ತು ನ್ಯೂಟ್ರಾನುಗಳ ಒಳಗೆ ಆರು ಬಗೆಯ ಕ್ಯಾರ್ಕುಗಳು ಕೂಡ ಮೂಲ ಕಣಗಳು. ಖಗ ಲೋಕದಿಂದ ಭೂಮಿಯ ಮೇಲೆ ಬೀಳುವ ಕಣಗಳು ಬಹಳ. ಈ ಖಗ ಲೋಕದ ಕಣಗಳನ್ನು ಖಗ ಕಣ ಎನ್ನೋಣ. ಅನೇಕ ತಾರೆಗಳಲ್ಲೂನೋವಾ ಅಂತಹ ಬೃಹತ್ ಸ್ಫೋಟಗಳಲ್ಲೂ ಹುಟ್ತಿ ಎಲ್ಲೆಲ್ಲೂಎಲ್ಲ ದಿಕ್ಕಿನಲ್ಲೂ ವಿಸ್ತರಿಸಿ ಭೂಮಿಯ ಮೆಲೂ ಬೀಳುತ್ತವೆ. ನ್ಯೂಕ್ಲಿಯರ್ ರಿಯಾಕ್ಟರಿನಲ್ಲೂ ಅನೇಕ ರೀತಿಯ ಮೂಲ ಕಣಗಳು ಹುಟ್ಟುತ್ತವೆ. ಅಣು ಬಾಂಬಿನ ಸ್ಫೋಟದಲ್ಲೂ ಅನೇಕ ಮೂಲ ಕಣಗಳು ಉತ್ಪತ್ತಿಯಾಗುತ್ತವೆ. ಆಲ್ಫ಼ಬೀಟಗ್ಯಾಮ ಮೂಲ ಕಣಗಳಂತೂ ಮಾನವ ಕುಲಕ್ಕೆ ಹಾನಿ ಎಂಬುದು ನಿಮಾಗೆ ಗೊತ್ತಿರ ಬಹುದು. ಬಿಂಬ ಭವದಲ್ಲಿ ಎಲ್ಲಾ ಮೂಲ ಕಣಗಳ ಬಿಂಬ ಕಣುಗಳು ಇರುತ್ತವೆ. ಉದಾಹರಣೆಗೆಎಲಕ್ಟ್ರಾನಿನ ಬಿಂಬ ಕಣ ಪಾಸಿಟ್ರಾನು. ಎಲಕ್ಟ್ರಾನಿಗೆ ಋಣ ವಿದ್ಯುತ್ ಗುಣ; ಪಾಸಿಟ್ರಾನಿಗೆ ಧನ ವಿದ್ಯುತ್ ಗುಣ. ಹೀಗೆಯೇ ಭವದ ಎಲ್ಲಾ ಭೌತ ಗುಣಗಳಿಗೆ ಬಿಂಬ ಗುಣಗಳು ಬಿಂಬ ಭವದಲ್ಲಿ ಇರುತ್ತವೆ. ನೀವು ಕನ್ನಡಿಯ ಮುಂದೆ ನಿಂತು ಬಲಗೈ ಓಡಾಡಿಸಿದರೆ ಬಿಂಬದಲ್ಲಿರುವ ನೀವು ಎಡಗೈಯನ್ನು ಓಡಾಡಿಸಿದ ಹಾಗೆ.

ಆರು ಬಗೆಯ ಕ್ವಾರ್ಕು ಗಳಿಗೂ ಬಿಂಬ ಕ್ವಾರ್ಕುಗಳು ಇರುತ್ತವೆ. ಪ್ರೋಟಾನು ಮತ್ತು ನ್ಯೂಟ್ರಾನು ಆರು ಕ್ವಾರ್ಕು ಗಳಿಂದ ಮಾಡಲ್ಪಟ್ಟಿರುವುದರಿಂದ ಅವಕ್ಕೆ ಸಂಯುಕ್ತ ಕಣ ಏನ್ನುತ್ತಾರೆ. ಇಂತಹ ಸಂಯುಕ್ತ ಕಣಗಳಿಗೂ ಬಿಂಬ ರೂಪಿ ಸಂಯುಕ್ತ ಕಣಗಳು ಇರುತ್ತವೆ. ಇವಕ್ಕೆ ಬಿಂಬ ಪ್ರೋಟಾನು ಮತ್ತು ಬಿಂಬ ನ್ಯೂಟ್ರಾನು ಎಂದು ಹೆಸರಿಡೋಣ.

ನನಗಂತೂ ವಿಜ್ಙಾನತಂತ್ರ ಜ್ಙಾನವ್ಯಾಪಾರ ಶಾಸ್ತ್ರ ಮತ್ತಿತರ ಶಾಸ್ತ್ರಗಳಲ್ಲಿ ಹೊಸ ಪದಗಳನ್ನು ಹೊಸೆದು ನಾಮಕರಣ ಮಾಡುವನಾಮಕರಣ ದಾತನಾಗಿ ಬರಹಗಳನ್ನು ಬರೆಯುವುದೂಭಾಷಣಗಳನ್ನು ಕೊಡುವುದೂ ಇಷ್ತವಾದದ್ದು. ಕೆಲವು ದಶಕಗಳಿಂದ ನಾಮಕರಣ ಕಾರಣನಾಗಿ ನಮ್ಮ ಅಚ್ಚುಮೆಚ್ಚಿನ ಕನ್ನಡದಲ್ಲೂಈ ಪದಗಳು ಸಂಕೃತ ಮೂಲದಿಂದ ಹುಟ್ಟಿರುವುದರಿಂದಇತರ ಭಾರತೀಯ ಭಾಷೆಗಳಲ್ಲೂ,ಶಬ್ಧ ಬಂಡಾರವನ್ನು ಬೆಳೆಸುವುದು ಮನಸ್ಸಿಗೆ ಸಂತಸವನ್ನು ತರುವ ಕೆಲಸ.

No comments:

Post a Comment